Monday, November 05, 2012

ಮಂಥನ!

ಮಥಿಸಬೇಕು ಅಂತರಂಗ 
ಕಟ್ಟುವುದು ಆಗಲೇ ಅಲ್ಲವೇ ಕೆನೆ 
ನಂತರ ಮಾತ್ರವೇ ಮೊಸರು -ಬೆಣ್ಣೆ 
ಮಥಿಸಿದಾಗಲೇ ಕ್ಷೀರ ಸಾಗರ
ಉಗಮಿಸಿಹುದು ಹಾಲು - ಹಾಲಾಹಲ
ಉಳಿಯೇಟಿನಿಂದಲೇ ಮೂರುತಿ
ಆಗುವುದು ಸುಂದರ, ಪಡೆವುದು ಕೀರುತಿ
ನಿರಂತರ ಮಂಥನವೀ  ಜೀವನ
ಸಿಗುವುದಿಲ್ಲಿ ದಿನವೂ ಹಾಲು - ಹಾಲಾಹಲ!